ರೈತರ ಅಕ್ರಮ ಸಕ್ರಮ ಯೋಜನೆ: ರೈತರ ಪಂಪ್ಸೆಟ್ಗಳಿಗೆ ಮೂಲಸೌಕರ್ಯ
1 min readಚಿತ್ರದುರ್ಗ, ಸೆಪ್ಟೆಂಬರ್ 02: ಚಿತ್ರದುರ್ಗ ಕಾರ್ಯ ಮತ್ತು ಪಾಲನ ಗ್ರಾಮೀಣ ಉಪವಿಭಾಗ ಬೆವಿಕಂ ವ್ಯಾಪ್ತಿಯ ಭರಮಸಾಗರ, ಭೀಮಸಮುದ್ರ, ಹಿರೇಗುಂಟನೂರು, ಪಂಡರಹಳ್ಳಿ, ಸಿರಿಗೆರೆ, ತುರುವನೂರು ಮತ್ತು ಕಸಬ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರು ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ 2009ರಿಂದ 2017ನೇ ಸಾಲಿನಲ್ಲಿ ರೂ.10,000/- ದಂಡದ ಹಣ ಪಾವತಿ ಮಾಡಿದ ರೈತರ ಪಂಪ್ಸೆಟ್ಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲಾಗುವುದು. ಹಣ ಪಾವತಿ ಮಾಡಿ, ಆರ್.ಆರ್.ಸಂಖ್ಯೆ ಪಡೆದ ಗ್ರಾಹಕರು ಸೆಪ್ಟೆಂಬರ್ 30ರೊಳಗೆ ಸಂಬಂಧಿಸಿದ ಶಾಖಾ ಕಚೇರಿಯಲ್ಲಿ ಹಣ ಪಾವತಿ ಮಾಡಿದ ರಶೀದಿಗಳೊಂದಿಗೆ ಶಾಖಾಧಿಕಾರಿಗಳನ್ನು ಭೇಟಿ ಮಾಡಿ ಬೆವಿಕಂನೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.