ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ: ಗ್ರಾ.ಪಂ.ಅಧ್ಯಕ್ಷ ಪಾಲಯ್ಯ
1 min readಚಳ್ಳಕೆರೆ: ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವಿದ್ದರೆ ಉತ್ತಮ ಕ್ರೀಡಾಪಟುವಾಗಲು ಸಾಧ್ಯ ಎಂದು ಕಾಲುವೇಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸೊಪ್ಪಿನ ಆರ್.ಪಾಲಯ್ಯ ಹೇಳಿದರು.
ತಾಲೂಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಮದಕರಿ ಏಕಲವ್ಯ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ 26ನೇ ಬಾರಿಗೆ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ 2021 ನ್ನು ಉದ್ಘಾಟಿಸಿದರು.
ಕ್ರೀಡೆ ಯುವಕರಲ್ಲಿ ಸದೃಢ ದೇಹ ಮತ್ತು ಮನಸ್ಸಿಗೆ ಮದವನ್ನು ನೀಡುತ್ತದೆ. ಕ್ರೀಡೆ ವಯಸ್ಸಿನ ಅಂಗಿಲ್ಲದೆ ಆಡುವಂತರದ್ದಾಗಿದೆ. ಎಲ್ಲಾರೂ ಸಹ ತಮ್ಮ ಒಂದಿಷ್ಟು ಸಮಯವನ್ನು ಕ್ರೀಡೆಗೆ ಮೀಸಲಿಟ್ಟರೆ ಉತ್ತಮ ಎಂದರು. ಈ ಸಂದರ್ಭದಲ್ಲಿ ಎಸ್ ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ನಾಯಕ್, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಹನುಮಂತರಾಯ, ಗ್ರಾಮ ಪಂಚಾಯತಿ ಸದಸ್ಯರಾದ ಗಾದ್ರಿಪಾಲಯ್ಯ ಎನ್, ಗ್ರಾಮ ಪಂಚಾಯತಿ ಸದಸ್ಯರಾದ ಜಂಪಣ್ಣ, ಬಿಜೆಪಿಯ ಮುಖಂಡರಾದ ರಂಗಸ್ವಾಮಿ ಜಿಟಿ, ಗೌಡರಹಟ್ಟಿ ಗಾದ್ರಿಪಾಲಯ್ಯ, ಸೊಪ್ಪಿನ ಮಂಜಣ್ಣ, ಲೋಕೇಶ್, ಬಂಡೆ ರಂಗ, ಆರ್ ಪಾಲಣ್ಣ, ಭೂತೇಶ್, ಪ್ರಭಾಕರ್, ರಾಘವೇಂದ್ರ ಎಸ್ ಟಿ, ಮಂಜುನಾಥ್, ರವಿಕುಮಾರ್, ಬಿ ಪಾಲಣ್ಣ, ಮುಂತಾದವರು ಇದ್ದರು