April 26, 2024

Chitradurga hoysala

Kannada news portal

ಜಿಲ್ಲಾಮಟ್ಟದ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಸ್ಪರ್ಧೆ: ವಿಜೇತ ವಿದ್ಯಾರ್ಥಿಗಳು

1 min read

ಚಿತ್ರದುರ್ಗ,ಫೆಬ್ರವರಿ26:
ಕರ್ನಾಟಕ ಉರ್ದು ಅಕಾಡೆಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಗುರುವಾರ ಉರ್ದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳ ವಿವರ ಇಂತಿದೆ.
ಸ್ಪರ್ಧೆಯಲ್ಲಿ ಜಿಲ್ಲೆಯ 19 ಪ್ರೌಢಶಾಲೆಗಳಿಂದ ಒಟ್ಟು 95 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರತಿ ಸ್ಪರ್ಧೆಗೆ ಐದು ನಗದು ಬಹುಮಾನ ನೀಡಲಾಯಿತು. ಪ್ರಥಮ ಬಹುಮಾನವಾಗಿ ರೂ.3000/-, ದ್ವಿತೀಯ ಬಹುಮಾನ ರೂ.2000/-, ಮೂರನೇ ಬಹುಮಾನ ರೂ.1000/- ಹಾಗೂ ಸಮಾಧಾನಕರ ಬಹುಮಾನ ರೂ.500/-ಗಳು ಸೇರಿದಂತೆ ಒಟ್ಟು ರೂ.32,500/-ಗಳನ್ನು ಕರ್ನಾಟಕ ಉರ್ದು ಅಕಾಡೆಮಿಯಿಂದ ನೀಡಲಾಯಿತು.
 2020ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉರ್ದು ಭಾಷೆಯಲ್ಲಿ 125ಕ್ಕೆ 124 ಅಂಕಗಳನ್ನ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಅಕಾಡೆಮಿಯಿಂದ ರೂ.2000/- ಗೌರವಧನ ನೀಡಿ, ಸನ್ಮಾನಿಸಲಾಯಿತು.
ಹಮ್ದ್ ನಾತ್: ಹಮ್ದ್ ನಾತ್ ಸ್ಪರ್ಧೆಯಲ್ಲಿ ಹೊಸದುರ್ಗ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿನಿ ನಜಿಯಾ ರೋಷನ್ ಪ್ರಥಮ ಬಹುಮಾನ ಪಡೆದರು. ಮೊಳಕಾಲ್ಮುರಿನ ಮೌಲನ್ ಅಜಾದ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಜೀಬಾ ತಸ್ನೀಮ್ ದ್ವೀತಿಯ ಬಹುಮಾನ, ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 8ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಉಸ್ಮಾನ್ ತೃತೀಯ ಬಹುಮಾನ ಪಡೆದರು.
 ಗಝಲ್: ಈ ಸ್ಪರ್ಧೆಯಲ್ಲಿ ಹಿರಿಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿನಿ ಹೀನಾ ಕೌಸರ್ ಪ್ರಥಮ ಬಹುಮಾನ ಪಡೆದರು. ಚಿತ್ರದುರ್ಗದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿನಿ ತಸ್ಮಿಯಾ ಭಾನು ದ್ವೀತಿಯ ಬಹುಮಾನ, ಹೊಳಲ್ಕೆರೆಯ ಎಂ.ಎಂ.ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಗಜಾಲ ಸರ್ವರ್ ತೃತೀಯ ಬಹುಮಾನ ಪಡೆದರು.
ಆಶುಭಾಷಣ ಸ್ಪರ್ಧೆ: ಹಿರಿಯೂರಿನ ಜಿಜೆಸಿ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿ ಆಯಿಷಾ ಸಿದ್ದಿಕಾ ಪ್ರಥಮ ಬಹುಮಾನ, ಚಳ್ಳಕೆರೆಯ ಮೌಲಾನ್ ಅಜಾದ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಮೀದಾ, ಮೊಳಕಾಲ್ಮರಿನ ಜಿಜೆಸಿಯ ಜೇಬಾ ಸುಜೇನ್ ಅವರು ತೃತೀಯ ಬಹುಮಾನ ಪಡದರು.
ಚರ್ಚಾ ಸ್ಪರ್ಧೆ: ಹೊಳಲ್ಕೆರೆಯ ಎನ್‍ಎಂಹೆಚ್‍ಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಲ್ಫಿಯಾ ಸುಹಾನ್, ಚಿತ್ರದುರ್ಗ ಜಿಹೆಚ್‍ಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಜುವೇಲಿಯ ಅಂಜುಂ ದ್ವಿತೀಯ ಬಹುಮಾನ, ಮೊಳಕಾಲ್ಮುರಿನ ಮೌಲಾನ್ ಅಜಾದ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಎಂ.ಸಫೀಯಾ ತೃತೀಯ ಬಹುಮಾನ ಪಡೆದರು.
ಪ್ರಬಂಧ ಸ್ಪರ್ಧೆ: ಚಿತ್ರದುರ್ಗ ಮಿಲ್ಲತ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಮುಬೀನಾ ಬಾನು (ಪ್ರ), ಮೊಳಕಾಲ್ಮೂರಿನ ಜಿಜೆಸಿ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿ ಜುವೇಲಿಯ ಸುಲ್ತಾನ್ (ದ್ವಿ), ಚಿತ್ರದುರ್ಗ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಬೀಬೀ ಹಾಜಿರಾ ತೃತೀಯ ಬಹುಮಾನ ಪಡದರು.

About The Author

Leave a Reply

Your email address will not be published. Required fields are marked *