ಮಾರ್ಚ್ 24 ರಂದು ಜನಸಂಪರ್ಕ ಸಭೆ
1 min readಚಿತ್ರದುರ್ಗ,ಮಾರ್ಚ್23:
ಚಿತ್ರದುರ್ಗ ಎಸಿಬಿ ಪೊಲೀಸ್ ಠಾಣೆ ವತಿಯಿಂದ ಮಾರ್ಚ್24ರಂದು ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಮಟ್ಟದ ಜನಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ ಕೊಂಡ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಾರ್ಚ್ 24ರಂದು ಮಧ್ಯಾಹ್ನ 2.30 ರಿಂದ 3.30ರವರೆಗೆ ಹಾಗೂ ತಳುಕು ಗ್ರಾಮದ ಗ್ರಾಮ ಪಂಚಾಯಿತಿ ಮುಂಭಾಗದ ಗ್ರಂಥಾಲಯದ ಆವರಣದಲ್ಲಿ ಮಧ್ಯಾಹ್ನ ಸಂಜೆ 4.00 ರಿಂದ 5.00 ರವರೆಗೆ ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಎಸಿಬಿ ಪೊಲೀಸ್ ಠಾಣೆ ಪೊಲೀಸ್ ಉಪಾಧೀಕ್ಷಕ ಬಸವರಾಜ ಆರ್.ಮಗದುಮ್, ಪಿ ಐ ಪ್ರವೀಣ್ ಕುಮಾರ್, ಪಿ.ಐ ಡಿ.ಎಸ್ ಆಂಜನೇಯ ಸಭೆಯಲ್ಲಿ ಹಾಜರಿರುವರು. ಈ ವೇಳೆಯಲ್ಲಿ ಸಾರ್ವಜನಿಕರು ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ತಮ್ಮ ದೂರುಗಳನ್ನು ನೀಡಬಹುದು.
ನೇರ ಅಹವಾಲು ನೀಡಲು ಸಾಧ್ಯವಾಗದಿದ್ದಲ್ಲಿ ದಾವಣಗೆರೆ ಪೂರ್ವ ವಲಯ ಎ.ಸಿ ಬಿ ಅಧಿಕಾರಿ ಜಯಪ್ರಕಾಶ್ 9480806206, ಬಸವರಾಜ್.ಆರ್.ಮಗದುಮ್, ಎಸಿಬಿ ಡಿಎಸ್ಪಿ ಚಿತ್ರದುರ್ಗ 9480806228, ಮತ್ತು ಪಿ.ಐ ಪ್ರವೀಣ್ ಕುಮಾರ್ 9480806286 ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಸ್ಥಿರ ದೂರವಾಣಿ –08194-230600ಗೆ ಸಂಪರ್ಕಿಸಬಹುದು ಎಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.