ಕೋವಿಡ್ ಲಸಿಕೆ ಪಡೆದು ದ ಶಿವಲಿಂಗಾನಂದ ಶ್ರೀಗಳು..
1 min readಚಿತ್ರದುರ್ಗ ಮಾ. ೨೩
ನಗರದ ಕಬೀರಾನಂದ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ಕೊರೋನಾ ಲಸಿಕೆಯನ್ನು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಪಡೆದಿದ್ದಾರೆ.
ಕರೋನಾದ ಮೊದಲ ಡೋಸ್ ವಾಕ್ಸಿನ್ ಪಡೆಯುವುದರ ಮೂಲಕ ಶ್ರೀಗಳು ಕೊರೋನಾ ಲಸಿಕೆಯನ್ನು ಪಡೆದಿದ್ದು, ಈಗಾಗಲೇ ಜಿಲ್ಲೆಯಲ್ಲಿ ವಿವಿಧ ಮಠಾಧೀಶರು ಸಹಾ ಕೊರೋನಾ ಲಸಿಕೆಯನ್ನು ಪಡೆಯುವುದರ ಮೂಲಕ ಕೊರೋನಾ ಮಹಾ ಮಾರಿಯನ್ನು ಹೊಡೆದೂಡಿಸಲು ಮುಂದಾಗಿದ್ದಾರೆ.
ಇತ್ತಿಚಿನ ದಿನಮಾನದಲ್ಲಿ ಕೋವಿಡ್-೧೯ ಹೆಚ್ಚಾಗುತ್ತಿದೆ ಇದರ ನಿಯಂತ್ರಣಕ್ಕೆ ಸರ್ಕಾರ ಲಸಿಕೆಯನ್ನು ಕಂಡು ಹಿಡಿದಿದ್ದು ಅದನ್ನು ಉಚಿತವಾಗಿ ನೀಡುತ್ತಿದೆ ಇದನ್ನು ಪಡೆಯುವುದರ ಮೂಲಕ ಕೊರೋನಾ ನಿರ್ನಾಮ ಮಾಡಬೇಕಿದೆ ಎಂದು ಜನತೆಯಲ್ಲಿ ಜಾಗೃತಿಯನ್ನು ಶಿವಲಿಂಗಾನಂದ ಶ್ರೀಗಳು ಮೂಡಿಸಿದ್ದಾರೆ.
ಕೊರೋನಾ ಲಸಿಕೆಯನ್ನು ಪಡೆದ ಮೇಲೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಆರಾಮಾಗಿ ಇದ್ದೇನೆ ಜನತೆಯೂ ಸಹಾ ಭಯ ಬೀಳದೆ ಈ ಲಸಿಕೆಯನ್ನು ಪಡೆಯುವುದರ ಮೂಲಕ ಕೊರೋನಾವನ್ನು ದೂರ ಮಾಡಬೇಕಿದೆ ಎಂದು ಜನತೆಗೆ ಶ್ರೀಗಳು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಬಸವರಾಜು ಉಪಸ್ಥಿತರಿದ್ದರು.