*ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರನ್ನು ಬೇಟಿಯಾದ ಪಂಚಮಸಾಲಿ ಶ್ರೀಗಳು*
1 min read
*ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರನ್ನು ಬೇಟಿಯಾದ ಪಂಚಮಸಾಲಿ ಶ್ರೀಗಳು* _________________ ಬೆಂಗಳೂರು: ಬಿಜೆಪಿ ಸರ್ಕಾರದ ನಾಯಕತ್ವ ವಿಚಾರಕ್ಕೆಸಂಬಂಧಿಸಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಪಕ್ಷದ ಮುಖಂಡರ ಅಭಿಪ್ರಾಯ ಸಂಗ್ರಹಿಸಿತ್ತಿದ್ದು, ಸುಮಾರು 53 ಮಂದಿ ಶಾಸಕರು ,ಹಲವಾರು ಸಚಿವರೊಂದಿಗೆ ವೈಯಕ್ತಿಕವಾಗಿ ಚರ್ಚೆ ನಡೆಸಿದ್ದಾರೆ. ಈತನ್ಮಧ್ಯೆ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ ಎಂಬುದು ಚರ್ಚೆಯ ವಿಷಯವಾಗಿದೆ .
ಗುರುವಾರ ರಾತ್ರಿ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಈ ವಿಷಯವು ತುಂಬಾ ಕೂತುಹಲ ಕೆರಳಿಸಿದ್ದು,ಈ ವಿಚಾರವಾಗಿ ಚಿತ್ರದುರ್ಗ ಹೊಯ್ಸಳ ಪತ್ರಿಕೆಯು ಶ್ರೀ ಗಳನ್ನು ಮಾತನಾಡಿಸಿದಾಗ ,,ನಾವು ರಾಜ್ಯ ಬಿಜೆಪಿ ಉಸ್ತುವಾರಿ ಅರಣ್ ಸಿಂಗ್ ರನ್ನು ಬೇಟಿಯಾಗಿರುವ ವಿಷಯದಲ್ಲಿ ಅತಿ ಮುಖ್ಯವಾದ ಸಂಗತಿ “ಪಂಚಮಸಾಲಿ ಮಿಸಲಾತಿ”ಗೆ ಸಂಭಂದಿಸಿದ್ದಾಗಿತ್ತು,ಜೊತೆಯಲ್ಲಿ ಬಿಜೆಪಿ ಇತ್ತೀಚಿನ ಬೆಳವಣಿಗೆ ಗಮನಿಸಿದ ನಾವು ಅವರಿಗೆ ಹೇಳಿದ್ದು ಇಷ್ಟೇ ,ನಿವೇನಾದರು ನಾಯಕತ್ವ ಬದಲಾಯಿಸಲೇ ಬೇಕಾದ ಅನಿವಾರ್ಯತೆ ಏನಾದರೂ ನಿಮ್ಮಲ್ಲಿದ್ದರೆ ಪಂಚಮಸಾಲಿ ಸಮಾಜದಲ್ಲಿಯೂ ಅರ್ಹ ನಾಯಕರಿದ್ದಾರೆ ಅಂತಹ ಸಂದರ್ಭದಲ್ಲಿ ನಮ್ಮ ಸಮಾಜದವರನ್ನು ಪರಿಗಣಿಸಿ ಎಂದಷ್ಟೇ ಹೇಳಿದ್ದೇವೆ ಎಂದರು .