April 26, 2024

Chitradurga hoysala

Kannada news portal

ಪತ್ರದ ಮೂಲಕ ಪಿಎಂ,ಸಿಎಂಗಳನ್ನು ಒತ್ತಾಯಿಸಿದ ಮಾದಿಗ ಮುಖಂಡರು*

1 min read

*ಪತ್ರದ ಮೂಲಕ ಪಿಎಂ,ಸಿಎಂಗಳನ್ನು ಒತ್ತಾಯಿಸಿದ ಮಾದಿಗ ಮುಖಂಡರು*
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾದಿಗ ಸಮುದಾಯದ ಪ್ರಮುಖರು ಬುಧವಾರ ಸಭೆ ಸೇರಿ, ಲೋಕಸಭಾ ಸದಸ್ಯ ಎ.ನಾರಾಯಣ ಸ್ವಾಮಿ ರವರನ್ನು ಕೇಂದ್ರ ಸಂಪುಟ ಪುನಾರಚನೆಯಲ್ಲಿ ಪರಿಗಣಿಸಿ ಕೇಂದ್ರ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಮಂತ್ರಿಗಳಿಗೆ ಅಪರ ಜಿಲ್ಲಾಧಿಕಾರಿಗಳ ಮೂಲಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರ ಮೂಲಕ ಮನವಿ ಸಲ್ಲಿಸಿದರು.
ಮುಖಂಡರಾದ ಡಿ.ಓ.ಮುರಾರ್ಜಿ, ಹೊಳಲ್ಕೆರೆ ಡಿ.ಆರ್. ಪಾಂಡುರಂಗ ಸ್ವಾಮಿ, ಟಿ.ದೇವರಾಜ್, ತಾ.ಪಂ. ಮಾಜಿ ಸದಸ್ಯ ಹನುಮಂತಪ್ಪ, ಪಾವಗಡ ಶಿವಕುಮಾರ್ ಸಾಕೇಲರು, ಶಿರಾ ರವಿಕುಮಾರ್, ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ, ನಾಯಕನಹಟ್ಟಿ ಶಿವದತ್ತ, ಕರಿಕೆರೆ ತಿಪ್ಪೇಸ್ವಾಮಿ, ಹೊಟ್ಟೆಪ್ಪನಹಳ್ಳಿ ಮಾರುತಿ ಇತರರು ಹಾಜರಿದ್ದರು.

About The Author

Leave a Reply

Your email address will not be published. Required fields are marked *