April 29, 2024

Chitradurga hoysala

Kannada news portal

*ಜಿಲ್ಲೆಯ ೬ ಕ್ಷೇತ್ರವು ಬಿಜೆಪಿ ಮಡಿಲಿಗೆ ಬರುವಂತಾಗಲಿ: ಸಚಿವ ನಾರಾಯಣ ಗೌಡ*

1 min read

*ಜಿಲ್ಲೆಯ ೬ ಕ್ಷೇತ್ರವು ಬಿಜೆಪಿ ಮಡಿಲಿಗೆ ಬರುವಂತಾಗಲಿ: ಸಚಿವ ನಾರಾಯಣ ಗೌಡ* (ಕಾರ್ಯಕರ್ತರ ಕುಂದು ಕೊರತೆ ಆಲಿಸಿ,ಜಿಲ್ಲೆಯಲ್ಲಿ ಪಕ್ಷ ಸಂಘಟನೆ ನೋಡಿದರೆ ಖುಷಿಯಾಗುತ್ತದೆ ಎಂದ ಕ್ರೀಡಾ,ಯೋಜನ ಮಂತ್ರಿ) _______________

ಚಿತ್ರದುರ್ಗ : ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಶ್ರದ್ಧೆ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಇದೇ ರೀತಿಯ ಕಾರ್ಯಶ್ರದ್ಧೆ ಮುಂದೆಯೂ ಇರಲಿ, ಜಿಲ್ಲೆಯ ಆರೂ ಕ್ಷೇತ್ರವು ಬಿಜೆಪಿ ಮಡಿಲಿಗೆ ಬರುವಂತಾಗಲಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು.

ಸಚಿವರು ಮಂಗಳವಾರ ಚಿತ್ರದುರ್ಗ ಜಿಲ್ಲಾ ಪ್ರವಾಸದ ವೇಳೆ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರ ಕುಂದು ಕೊರತೆ ಆಲಿಸಿದ ಸಚಿವರು, ಜಿಲ್ಲೆಯಲ್ಲಿ ಪಕ್ಷ ಸಂಘಟನೆ ನೋಡಿದರೆ ಖುಷಿಯಾಗುತ್ತದೆ. ಎಲ್ಲ ಜಿಲ್ಲೆಯಲ್ಲಿಯೂ ಇದೇ ರೀತಿ ಪಕ್ಷ ಸಂಘಟನೆ ಆಗಬೇಕು. ಶಾಸಕರು, ಸಂಸದರು ಇಲ್ಲಿ ಜನರೊಂದಿಗೆ, ಕಾರ್ಯಕರ್ತರೊಂದಿಗೆ ಬೆರೆತು ಕೆಲಸ ಮಾಡುವ ಶೈಲಿ ಮಾದರಿಯಾಗಿದೆ. ತಿಪ್ಪಾರೆಡ್ಡಿಯಂತಹ ಹಿರಿಯರ ಅನುಭವದೊಂದಿಗೆ ಕಾರ್ಯಕರ್ತರು ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು .

ಹಿರಿಯ ಶಾಸಕ ತಿಪ್ಪಾರೆಡ್ಡಿ, ಪದಾಧಿಕಾರಿಗಳಾದ ಸುರೇಶ್ ಸಿದ್ದಾಪುರ, ವಕ್ತಾರ ದಗ್ಗೆ ಶಿವಪ್ರಕಾಶ್, ವೆಂಟಕೇಶ್ ಯಾದವ್, ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *