*ಪರಿಸರ ಕಾಳಜಿ ಪ್ರತೀಕ ಹುಟ್ಟುಹಬ್ಬ ಆಚರಣೆ*
1 min read*ಪರಿಸರ ಕಾಳಜಿ ಪ್ರತೀಕ ಹುಟ್ಟುಹಬ್ಬ ಆಚರಣೆ*
ಚಿತ್ರದುರ್ಗ:
ಪರಿಸರ ಕಾಳಜಿಯಲ್ಲಿ ಸದಾ ಮುಂದಿರುವ
ಶಿವಶರಣ ಮಾದಾರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮಿಗಳು ಸೋಮವಾರ ತಮ್ಮ ಜನ್ಮ ದಿನಾಚರಣೆಯನ್ನು ಅಪಾರ ಭಕ್ತರ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡಿದ್ದಾರೆ. ಈ ಪ್ರಯುಕ್ತ ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ನೂರು ತೇಗದ ಸಸಿಗಳನ್ನು ನೆಡಲಾಯಿತು.
ಸಸಿ ನೆಡುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ರಾಜ್ಯಸಭಾ ಸದಸ್ಯರು ಹಾಗೂ ಎಸ್ ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ನ ಕಾರ್ಯದರ್ಶಿ ಹೆಚ್. ಹನುಮಂತಪ್ಪ ನವರು ವಹಿಸಿದ್ದರು.ನಂತರ ಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಾಡಿನ ಮೂಲೆ ಮೂಲೆಯಿಂದ ಗಣ್ಯರು ,ಧಾರ್ಮಿಕ ,ರಾಜಕೀಯ ನಾಯಕರು ಆಗಮಿಸಿ ಶ್ರೀಗಳಿಗೆ ಶುಭಾಶಯ ಕೋರಿದರು. ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿಗಳು ತಮ್ಮ ಸರಳ ಹಾಗೂ ಮಾನವೀಯತೆಯ ನಡವಳಿಕೆಯಿಂದಾಗಿ ಅಪಾರ ಭಕ್ತರನ್ನು , ಅಭಿಮಾನಿಗಳನ್ನು ಹೊಂದಿದ್ದಾರೆ.ಶ್ರೀ ಶಿವಶರಣ ಮಾದಾರಚನ್ನಯ್ಯ ಗುರುಪೀಠದಲ್ಲಿ ಭಕ್ತ ಸಮೂಹ ಏರ್ಪಡಿಸಿದ್ದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಶಿವಲಿಂಗಾನಂದ ಮಹಾಸ್ವಾಮೀಜಿ, ಶ್ರೀ ಬಸವ ಶಾಂತವೀರ ಸ್ವಾಮೀಜಿ,ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ,ಶ್ರೀ ಷಡಕ್ಷರಮುನಿ ಸ್ವಾಮೀಜಿ, ಶ್ರೀಬಸವ ಹರಳಯ್ಯಸ್ವಾಮೀಜಿ, ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಜಿ.ಪಂ. ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಹೆಚ್ ಹನುಮಂತಪ್ಪ ಬಳ್ಳಾರಿ , ಕಾಂಗ್ರೆಸ್ ಮುಖಂಡರಾದ ಜಿ.ಎಸ್ ಮಂಜುನಾಥ್, ಕೆ.ಎಂ. ಹಾಲೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ,
ಬಿ.ಜೆ.ಪಿ ಮುಖಂಡ ಕೆ.ಎಸ್. ನವೀನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರಿನಾಥ್, ಹೊಳಲ್ಕೆರೆ ಯುವ ಮುಖಂಡ ಪಿ ರಘು ಸೇರಿದಂತೆ ಅನೇಕ ಮುಖಂಡರು ರಾಜ್ಯದ ವಿವಿದೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.