April 26, 2024

Chitradurga hoysala

Kannada news portal

ಸ್ವಾತಂತ್ರ್ಯದ ಅಮೃತ ಘಳಿಗೆ ಅಂಗವಾಗಿ ಯುವ ಸಂಕಲ್ಪ ರ್ಯಾಲಿ – ಜಿಲ್ಲಾ ಭಾಜಪ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತೇಗೌಡರ ನೇತೃತ್ವದಲ್ಲಿ ಕಾರ್ಯಕ್ರಮ.

1 min read

ಸ್ವಾತಂತ್ರ್ಯದ ಅಮೃತ ಘಳಿಗೆ ಅಂಗವಾಗಿ ಯುವ ಸಂಕಲ್ಪ ರ್ಯಾಲಿ – ಜಿಲ್ಲಾ ಭಾಜಪ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತೇಗೌಡರ ನೇತೃತ್ವದಲ್ಲಿ ಕಾರ್ಯಕ್ರಮ.

ಚಿತ್ರದುರ್ಗ : 75 ಜನ 75 ಸೈಕಲ್ 75 ಕಿಲೋಮೀಟರ್ ಶ್ರಮಿಸುವ ಮೂಲಕ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಯುವ ಸಂಕಲ್ಪ ರ್ಯಾಲಿ ಯನ್ನು ಚಿತ್ರದುರ್ಗ ಜಿಲ್ಲಾ ಭಾಜಪ ಯಿಂದ ಯುವ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಹನುಮಂತೇಗೌಡರ ಮುಂದಾಳತ್ವದಲ್ಲಿ 15 ನೇ ತಾರೀಖು ಭಾನುವಾರದಂದು ಜಿಲ್ಲೆಯ 9 ಮಂಡಲಗಳಲ್ಲಿ ಮ್ಯಾರಥಾನ್ ಕಾಲ್ನಡಿಗೆ ಜಾಥಾ, ಸ್ವಚ್ಛ ಕಾರ್ಯಕ್ರಮ, ಸಸಿ ನೆಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರ ಜೊತೆಗೆ ಆರೋಗ್ಯ ಸೇವಾ ಕರ್ತರಿಗೆ ಸಿಹಿ ವಿತರಣೆ, ಯುವಕರಲ್ಲಿ ಪ್ರಮುಖವಾಗಿ ದೈಹಿಕ ಬಲವರ್ಧನೆ, ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸೈಕಲ್ ರ್ಯಾಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ನಮ್ಮ ಜೊತೆ ಅನೇಕ ಸಂಘ ಸಂಸ್ಥೆಗಳು, ಯುವಕರು ರಾಷ್ಟ್ರಭಕ್ತಿಯ ಆಚರಣೆ ಸಂದರ್ಭದಲ್ಲಿ ನಮ್ಮ ಜೊತೆ ಕೈ ಜೋಡಿಸಲ್ಲಿದ್ದಾರೆ ಎಂದು ತಿಳಿಸಿದರು. ಅಂದು ಬೆಳಗ್ಗೆ 6:00 ಗಂಟೆಗೆ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪುತ್ತಳಿಗೆ ಹೂವಿನ ಹಾರ ಹಾಕಿ ಪ್ರಾರಂಭವಾಗುವ ಸೈಕಲ್ ರ್ಯಾಲಿ ರಾಷ್ಟ್ರೀಯ ಹೆದ್ದಾರಿ 13 ರ ಮೂಲಕ ಗುಡ್ಡದ ರಂಗವ್ವನಹಳ್ಳಿ, ಮಾಡನಾಯಕನಹಳ್ಳಿ, ಚಿಕ್ಕಗೊಂಡನಹಳ್ಳಿ, ಹವಳೆನಹಳ್ಳಿ, ಮೂಲಕ ತುರುವನೂರು ಗ್ರಾಮ ದಲ್ಲಿ ಮಹಾತ್ಮ ಗಾಂಧೀಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಕೂನಬೇವು, ಹುಣಸೆಕಟ್ಟೆ, ಬಾಗೇನ್ ಹಾಳ್, ಬೆಳಗಟ್ಟ ಸಾಸಲು, ಗೋನೂರು ಮೂಲಕ ಚಿತ್ರದುರ್ಗದಲ್ಲಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಗಲಿದೆ. ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ಪತ್ರಿಕಾಗೂಷ್ಠಿಯಲ್ಲಿ ತಿಳಿಸಿದರು.

About The Author

Leave a Reply

Your email address will not be published. Required fields are marked *