April 26, 2024

Chitradurga hoysala

Kannada news portal

ಸಿಎಂ ಗುಣ ಮುಖರಾಗಲಿ ಎಂದು ನಾಯಕನಹಟ್ಟಿ ತಿಪ್ಪೇಸ್ವಾಮಿಗೆ ಹರಕೆ ಮಾಡಿಕೊಳ್ಳುವೆ: ಸಚಿವ ಬಿ.ಶ್ರೀರಾಮುಲು

1 min read

 ಚಿತ್ರದುರ್ಗ:  ಸಿಎಂ ಯಡಿಯೂರಪ್ಪಗೆ ಕೊರೋನಾ ಸೋಂಕು ಧೃಡವಾಗಿದ್ದಯ  ಸಿಎಂ ಗುಣ ಮುಖರಾಗಲಿ ಎಂದು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವರಲ್ಲಿ ಹರಕೆ ಮಾಡಿಕೊಳ್ಳುತ್ತೇನೆ ಎಂದು   ಆರೋಗ್ಯ ಸಚಿವ ಬಿ. ಶ್ರೀ ರಾಮುಲು ಹೇಳಿದರು

ನಾಯಕನಹಟ್ಟಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿಸ ಸಚಿವರುಸಿಎಂ ಶೀಘ್ರ ಗುಣಮುಖರಾಗಲು ತಿಪ್ಪೇರುದ್ರಸ್ವಾಮಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ.

24 ಗಂಟೆ ನಿರಂತರವಾಗಿ ಕೊರೋನಾ ನಿಯಂತ್ರಿಸುವ ಕೆಲಸ ಮಾಡಿದ್ದಾರೆ.

ಬೆಂಗಳೂರು ಸೇರಿ ರಾಜ್ಯದ ಬೇರೆ ಬೇರೆ ಕಡೆ ಕೊವೀಡ್ ಜಾಗೃತಿ ಮೂಡಿಸಿದ್ದರು.

ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದರು. ರಾಜ್ಯದಲ್ಲಿ ಕೊರೋನಾ ಟೆಸ್ಟ್ ಹೆಚ್ಚು ಮಾಡಬೇಕಿದೆ.ರ್ಯಾಪಿಡ್ ಟೆಸ್ಟ್ ಹೆಚ್ಚಳ ಮಾಡುವ ನಿರ್ಧಾರ ಮಾಡಿದ್ದೇವೆ.

ಬೆಂಗಳೂರು ಭಾಗದ ಎಂಟು ವಲಯದಲ್ಲಿ ಮಾಡಿದಂತೆ, ಎಲ್ಲಾ ಜಿಲ್ಲೆಗಳಲ್ಲಿ ಟಾಸ್ಕ್ ಪೋರ್ಸ್ ತಂಡಗಳನ್ನ ಮಾಡಿ ಕೊರೋನಾ ನಿಯಂತ್ರಣದ ಪ್ರಯತ್ನ ಮಾಡುತ್ತೇವೆ. ಖಾಸಗಿ ಆಸ್ಪತ್ರೆ ಬಗ್ಗೆ ಬಹಳ ದೂರುಗಳಿವೆ.

ಬೆಂಗಳೂರು 19 ಆಸ್ಪತ್ರೆ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆ ಲೈಸನ್ಸ್ ರದ್ದು ಮಾಡುವ ಕೆಲಸ ಮಾಡಿದ್ದೇವೆ. 24 ಮಂದಿ ಬಳಿ ಹಣ ಪಡೆದಿದ್ದ ಖಾಸಗಿ ಆಸ್ಪತ್ರೆಯಿಂದ ಹಣ ವಾಪಸ್ ಕೊಡಿಸಿದ್ದೇವೆ ಎಂದು ತಿಳಿಸಿದರು

About The Author

Leave a Reply

Your email address will not be published. Required fields are marked *