May 3, 2024

Chitradurga hoysala

Kannada news portal

ಚುನಾವಣಾ ಸಮಯದಲ್ಲಿ ಕೊಟ್ಟ ಭರವಸೆಗಳನ್ನು ಹಿಡೇರಿಸುತ್ತಿದ್ದೇನೆ: ಸಚಿವ ಬಿ.ಶ್ರೀರಾಮುಲು

1 min read

ಚಿತ್ರದುರ್ಗ: ಮೊಳಕಾಲ್ಮುರು ಜನತೆಗೆ ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಾಯಕನಹಟ್ಟಿಯ ಚಿಕ್ಕಕೆರೆಯ ಬಳಿ ಮಳೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ 59 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಶಂಕುಸ್ಥಾಪನೆ ನೆರವೇರಿಸಲಾಯಿತು. 538 ಕೋಟಿ ರೂ. ವೆಚ್ಚದ ಈ ಯೋಜನೆಗೆ ಫೆಬ್ರುವರಿ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಒಪ್ಪಂದ ಕೂಡ ಆಗಿತ್ತು. ಆದರೆ ಕೊರೋನ ಸೋಂಕಿನಿಂದಾಗಿ ಕಾಮಗಾರಿ ಕೈಗೆತ್ತಿಕೊಳ್ಳುವುದು ತಡವಾಗಿತ್ತು.
ಚುನಾವಣಾ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ನೀಡಿದ್ದ ಭರವಸೆಯಂತೆ ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿರುವುದು ಖುಷಿ ತಂದಿದೆ ಮುಂದಿನ ದಿನಗಳಲ್ಲಿ ಕಾಮಗಾರಿಯ ವೇಗ ಎಂದು ಹೆಚ್ಚಿಸಿ ಅದಷ್ಟು ಬೇಗ ಕಾಮಗಾರಿ ಮುಗಿಸುವ ಕೆಲಸ ಮಾಡುತ್ತೇನೆ.ಜನರಿಗೆ ಕೆಲಸ ಆಗಬೇಕು ಅದೇ ನನ್ನ ಉದ್ದೇಶವಾಗಿದೆ. ಮಾತಿನಿಂದ ಸುಖವಿಲ್ಲ ಜನರ ಕೆಲಸವನ್ನು ಮಾತ್ರ ಗಮನಿಸುತ್ತಿರುತ್ತಾರೆ.ಅದಕ್ಕಾಗಿ ಕೆಲಸಕ್ಕೆ ಒತ್ತು ನೀಡಲಾಗುವುದು ಎಂದರು.ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಜನರು ಅಂತರ ಕಾಯ್ದುಕೊಂಡು ಬದುಕು ನಡೆಸಬೇಕು ಸ್ಯಾಬಿಟೈಸರ್ ಮತ್ತು ಮಾಸ್ಕ್ ಕಡ್ಡಾಯವಾಗಿ ಬಳಸಬೇಕು ಎಂದು ಮನವಿ ಮಾಡಿದರು.

About The Author

Leave a Reply

Your email address will not be published. Required fields are marked *