ಬಡ ರೈತನ ಮಗಳ ಸಾಧನೆ
1 min readಚಿತ್ರದುರ್ಗ, ಆ.12:
ಚಿತ್ರದುರ್ಗ ವ್ಯಾಪ್ತಿಯ ಮೆದೇಹಳ್ಳಿ ಗ್ರಾಮದ ಕೂಲಿ ಹಾಗೂ ಕುಟುಂಬ ನಿರ್ವಹಣೆಗಾಗಿ ಇರುವ ಒಂದು ಎಕರೆ ಜಮೀನಿನಲ್ಲಿ ಜೀವನ ಸಾಗಿಸುವ ಮಲ್ಲಿಕಾರ್ಜುನ ಹಾಗೂ ನಿರ್ಮಲ ದಂಪತಿಯ ಪುತ್ರಿ ಎಂ.ಸುಚಿತ್ರ ಎಂಬ ವಿದ್ಯಾರ್ಥಿನಿ ಗಾರ್ಡಿಯನ್ ಎಂಜಲ್ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 610 ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ.