ಶಿಕ್ಷಕ ಸಮಾಜದ ಅಜ್ಞಾನವನ್ನು ದೂರ ಮಾಡಿ, ಅಂಕುಡೊಂಕುಗಳನ್ನು ತಿದ್ದುವ ಮಹಾನ್ ಶಿಲ್ಪಕಾರ: ಶಾಸಕ ಟಿ.ರಘುಮೂರ್ತಿ
1 min readಚಳ್ಳಕೆರೆ-ಶಿಕ್ಷಕ ಸಮಾಜದ ಅಜ್ಞಾನವನ್ನು ದೂರ ಮಾಡಿ, ಅಂಕುಡೊಂಕುಗಳನ್ನು ತಿದ್ದುವ ಮಹಾನ್ ಶಿಲ್ಪಕಾರ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಕ್ಷೇತ್ರಕ್ಕಿಂತ ಶಿಕ್ಷಣ ಅತಿ ಪವಿತ್ರವಾಗಿದೆ. ಆ ಪವಿತ್ರತೆಯನ್ನು ಕಾಪಾಡಿಕೊಳ್ಳಬೇಕು. ಎಲ್ಲಾ ರಂಗಕ್ಕಿಂತ ಶಿಕ್ಷಣ ಪ್ರಮುಖ್ಯತೆಯನ್ನು ಪಡೆದಿದೆ. ಸಮಾಜದಲ್ಲಿ ಇರುವಂತಹ ಅಜ್ಞಾನವನ್ನು ದೂರ ಮಾಡಲು ಶಿಕ್ಷಣ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂದರು.
ಆಚಾರ್ಯ ದೇವೋ ಭವ ಎಂಬ ಸಂಸ್ಕೃತಿ ನಮ್ಮದು. ಹೆತ್ತ ತಾಯಿ, ಬದುಕು ಕಲಿಸಿದ ತಂದೆ ಮತ್ತು ಸಂಸ್ಕಾರ ನೀಡಿದ ಗುರು ಮೂವರನ್ನೂ ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸುವುದು ಭಾರತೀಯ ಸಂಸ್ಕೃತಿಯ ಹೆಗ್ಗಳಿಕೆಯೂ ಹೌದು.
ಅಸಂಖ್ಯ ಮಕ್ಕಳ ಭವಿಷ್ಯ ರೂಪಿಸಿ, ಆ ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡಿದ ಶಿಕ್ಷಕರ ನೆನಪು ಹಾಗೂ ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಸವಿ ನೆನಪಿಗಾಗಿ ಸೆಪ್ಟೆಂಬರ್ 5 ಅನ್ನು ಭಾರತದಾದ್ಯಂತ ರಾಷ್ಟ್ರೀಯ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿರುವುದು ಸಂತೋಷದ ವಿಚಾರವಾಗಿದೆ.
ಮಕ್ಕಳಿಗೆ ಶಿಕ್ಷಕರು ಎಂದರೆ ತುಂಬಾ ಗೌರವ ಮತ್ತು ಕುಟುಂಬಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಮಕ್ಕಳು ಶಿಕ್ಷಕರಿಗೆ ನೀಡುತ್ತಾರೆ. ಮಕ್ಕಳ ಭವಿಷ್ಯದ ಸೂತ್ರ ಶಿಕ್ಷಕರ ಕೈಲ್ಲಿ ಇರುತ್ತದೆ ಎಂದು ಹೇಳಿದರು. ಜಿಲ್ಲಾ ಪಂಚಾಯತ ಸದಸ್ಯರು, ತಾಲೂಕು ಪಂಚಾಯತ ಸದಸ್ಯರು, ಶಿಕ್ಷಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.