April 27, 2024

Chitradurga hoysala

Kannada news portal

ಟೊಮೆಟೊ ಆಲೂಗೆಡ್ಡೆ ಬದನೆಕಾಯಿ ಕಡಿಮೆ ತಿನ್ನಬೇಕಂತೆ!! ಯಾಕೆ ಗೊತ್ತಾ?

1 min read

ಕೆಲವೊಂದು ಅತ್ಯವಶ್ಯ ತರಕಾರಿಗಳನ್ನು ಸಹ ನಾವು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಇದಕ್ಕೆ ಉದಾಹರಣೆ ಎಂದರೆ ಆಲೂಗಡ್ಡೆ, ಟೊಮೆಟೊ, ಕ್ಯಾಪ್ಸಿಕಂ ಇತ್ಯಾದಿ……

ನಾವೆಲ್ಲರೂ ಸಹ ಹೆಚ್ಚಾಗಿ ನಮ್ಮ ನಮ್ಮ ಮನೆಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ತರಕಾರಿಗಳನ್ನು ಯಾವುದಾದರೂ ಒಂದು ರೂಪದಲ್ಲಿ ಸೇವನೆ ಮಾಡುತ್ತಿರುತ್ತೇವೆ. ಬೆಳಗಿನ ತಿಂಡಿಯ ಸಮಯದಲ್ಲಿ ಪಲಾವ್, ಬಿಸಿಬೇಳೆ ಬಾತ್ ಇತ್ಯಾದಿಗಳಲ್ಲಿ ತರಕಾರಿಗಳು ಬಳಕೆಯಾಗುತ್ತವೆ.

ಅದೇ ರೀತಿ ರಾತ್ರಿಯ ಡಿನ್ನರ್ ಸಮಯದಲ್ಲೂ ಸಹ ತರಕಾರಿಗಳ ಪಲ್ಯ ಅಥವಾ ವೆಜಿಟೇಬಲ್ ಸಲಾಡ್ ಇತ್ಯಾದಿಗಳು ನಮ್ಮ ಆಹಾರ ಸೇವನೆಯ ರೂಪದಲ್ಲಿ ಸಿಗುತ್ತವೆ. ಇನ್ನು ಮಧ್ಯಾಹ್ನದ ಊಟದ ಸಮಯದಲ್ಲಿ ಅನ್ನ ಮತ್ತು ತರಕಾರಿ ಸಾರು ತಿನ್ನುತ್ತೇವೆ.

ಈ ಎಲ್ಲಾ ಅಡುಗೆಗಳಲ್ಲಿ ಟೊಮೆಟೊ ಇದ್ದೇ ಇರುತ್ತದೆ. ಜೊತೆಗೆ ಆಲೂಗಡ್ಡೆ ಅಥವಾ ಬದನೆಕಾಯಿ ಸಹ ಇರಬಹುದು. ಇನ್ನು ಕ್ಯಾಪ್ಸಿಕಂ ವಿಚಾರವನ್ನು ತೆಗೆದುಕೊಂಡರೆ ಬೆಳಗಿನ ಉಪಹಾರದ ಸಮಯದಲ್ಲಿ ತಯಾರಾಗುವ ಸಾಕಷ್ಟು ತಿಂಡಿಗಳಿಗೆ ಮತ್ತು ಸಂಜೆಯ ಸ್ನ್ಯಾಕ್ಸ್ ಸಮಯದಲ್ಲಿ ನಾವು ಸೇವನೆ ಮಾಡುವ ಯಾವುದಾದರೂ ಒಂದು ರೂಪದಲ್ಲಿ ನಮ್ಮ ದೇಹ ಸೇರುತ್ತದೆ.

​ಸಂಶೋಧಕರು ಪ್ರಕಾರ ತರಕಾರಿಗಳನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕಂತೆ!

  • ಆದರೆ ಒಂದು ಅಚ್ಚರಿ ವಿಚಾರ ಎಂದರೆ ವೈದ್ಯರು ನಮಗೆ ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು ಎಂದು ಹೇಳುತ್ತಾರೆ. ಅದೇ ಸಮಯದಲ್ಲಿ ಸಂಶೋಧಕರು ಈ ಮೇಲೆ ಹೇಳಿದ ಕೆಲವೊಂದು ತರಕಾರಿಗಳನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು ಅಥವಾ ಸಾಧ್ಯವಾದರೆ ಅವುಗಳಿಂದ ದೂರ ಉಳಿದರೆ ಒಳ್ಳೆಯದು ಎಂಬ ವಾದವನ್ನು ಮಂಡಿಸುತ್ತಾರೆ.
  • ಇದೊಂದು ಹೊಸ ವಿಷಯ ಎನಿಸಬಹುದು ಮತ್ತು ಕೇಳುತ್ತಿರುವ ಜನರಿಗೆ ಆಶ್ಚರ್ಯ ಕೂಡ ಆಗಬಹುದು. ಆದರೆ ಇದು ಸತ್ಯ. ಏಕೆಂದರೆ ಈಗಾಗಲೇ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಲು ಕಾರಣಗಳು ಇದೇ ತರಕಾರಿಗಳು ಎಂದು ತಿಳಿದುಬಂದಿದೆ.
  • ಹಾಗಾಗಿ ನಾವು ನೀವು ಈ ವಿಚಾರದ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುವುದು ಒಳ್ಳೆಯದು. ಈ ಲೇಖನದಲ್ಲಿ ಇವುಗಳ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ನೀಡಲಾಗಿದೆ.

​ಸಂಶೋಧಕರು ಏನು ಹೇಳುತ್ತಾರೆ?

ಸಂಶೋಧಕರ ಪ್ರಕಾರ ಈ ತರಕಾರಿಗಳು ನಮ್ಮ ದೇಹದಲ್ಲಿ ಉರಿಯೂತದ ಸಮಸ್ಯೆಯನ್ನು ಹೆಚ್ಚು ಮಾಡುತ್ತವೆ. ಹಾಗಾಗಿ ಬದನೆಕಾಯಿ, ಕ್ಯಾಪ್ಸಿಕಂ, ಟೊಮ್ಯಾಟೋ ಮತ್ತು ಇದೇ ಗುಂಪಿಗೆ ಸೇರಿದ ಇನ್ನಿತರ ತರಕಾರಿಗಳನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ ಎಂಬುದು ಅವರ ಮಾತು

​ಸೋಲನೈನ್ ಅಂಶದ ಪ್ರಭಾವ

  • ಇದೊಂದು ಆಲ್ಕಲಾಯ್ಡ್ ಅಂಶ ಆಗಿದ್ದು ಆಲೂಗಡ್ಡೆ ಟೊಮೆಟೊ ತರಹದ ತರಕಾರಿಗಳಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಈ ಅಂಶ ಕಂಡುಬರುತ್ತದೆ. ಆದರೆ ಆರೋಗ್ಯಕ್ಕೆ ಇದು ಮಾರಕ ಪ್ರಭಾವವನ್ನು ಉಂಟು ಮಾಡುವ ಸಾಧ್ಯತೆ ಇದೆ ಎಂದು ಸಂಶೋಧನೆ ಹೇಳುತ್ತದೆ.
  • ಮುಖ್ಯವಾಗಿ ಜೀರ್ಣ ಪ್ರಕ್ರಿಯೆಯಲ್ಲಿ ಈ ಅಂಶ ನಮ್ಮ ದೇಹಕ್ಕೆ ಹೀರಲ್ಪಟ್ಟು ದೀರ್ಘ ಕಾಲದವರೆಗೆ ನಮ್ಮ ದೇಹದಲ್ಲಿ ಇದು ಶೇಖರಣೆಯಾಗುತ್ತದೆ. ಯಾವುದೇ ಸಂದರ್ಭದಲ್ಲಿ ಮೆಟಬಾಲಿಕ್ ಪ್ರಕ್ರಿಯೆಯಿಂದ ನಮಗೆ ಎದುರಾಗುವ ಒತ್ತಡದ ಸಮಯದಲ್ಲಿ ಅಥವಾ ಇನ್ನಿತರ ಆರೋಗ್ಯದ ಅಸ್ವಸ್ಥತೆಯ ಸಂದರ್ಭದಲ್ಲಿ ಈ ಅಂಶ ನಮ್ಮ ದೇಹದಿಂದ ಬಿಡುಗಡೆಯಾಗಿ ಆರೋಗ್ಯದ ಮೇಲೆ ಮತ್ತಷ್ಟು ಸಮಸ್ಯೆಯನ್ನು ತಂದು ಕೊಡುವ ಸಾಧ್ಯತೆ ಇದೆ.
  • ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಹೊಟ್ಟೆ ಹಸಿವು ಊಟದ ಸಂದರ್ಭದಲ್ಲಿ ದೇಹದಲ್ಲಿ ಶೇಖರಣೆಯಾದ ಸೋಲನೈನ್ ಅಂಶ ಬಿಡುಗಡೆಯಾಗುತ್ತದೆ ಎಂದು ಹೇಳುತ್ತಾರೆ.

​ಋತುಬಂಧದ ಅವಧಿಯಲ್ಲಿ ಇರುವ ಮಹಿಳೆಯರಿಗೆ ಆರ್ಥ್ರೈಟಿಸ್ ಸಮಸ್ಯೆಗೆ ಕಾರಣವಾಗುತ್ತದೆ

  • ಸಂಶೋಧನೆ ಕೈಗೊಂಡ ಅಧ್ಯಯನದಲ್ಲಿ ಈ ಒಂದು ವಿಚಾರ ಕೂಡ ಬಯಲಾಗಿದೆ. ಮೊದಲೇ ಹೇಳಿದಂತೆ ಆಹಾರ ಪದ್ಧತಿಯಲ್ಲಿ ಇಂತಹ ತರಕಾರಿಗಳನ್ನು ಯಥೇಚ್ಛವಾಗಿ ಬಳಸಲು ಹೋದರೆ ಮಹಿಳೆಯರಿಗೆ ಕೀಲು ನೋವುಗಳ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ.
  • ಅದರಲ್ಲೂ ವಯಸ್ಸಾದ ಮೇಲೆ ಋತು ಬಂಧದ ಅವಧಿಗೆ ತಲುಪಿದ ಮಹಿಳೆಯರಲ್ಲಿ ಕೀಲು ನೋವು ಸಮಸ್ಯೆ ಅಧಿಕವಾಗಿ ದೇಹದಲ್ಲಿ ಅಂಗಾಂಶಗಳು ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈಗಾಗಲೇ ಸಾಕಷ್ಟು ಮಹಿಳೆಯರಿಗೆ ದೈಹಿಕವಾಗಿ ಈ ರೀತಿಯ ತೊಂದರೆಗಳು ಎದುರಾದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

​ವಿಷಕಾರಿ ಪ್ರಭಾವ ಉಂಟಾಗುವ ಸಾಧ್ಯತೆಯೂ ಕೂಡ ಇದೆ

  • ಪುಟ್ಟ ಮಕ್ಕಳಲ್ಲಿ ಉಂಟಾದ ವಿಪರೀತ ವಾಂತಿ ಮತ್ತು ಭೇದಿ ಸಮಸ್ಯೆ ಸಂಶೋಧಕರ ನಿದ್ದೆಗೆಡಿಸಲು ಇದೊಂದು ಕಾರಣ ಎನಿಸುತ್ತದೆ.
  • ಏಕೆಂದರೆ ಲಂಡನ್ ದೇಶದಲ್ಲಿ ಶಾಲೆಗೆ ಹೋಗುವ ಮಕ್ಕಳು ಪ್ರತಿದಿನ ತಮ್ಮ ಆಹಾರಪದ್ಧತಿಯಲ್ಲಿ ಆಲೂಗಡ್ಡೆಯ ಆಹಾರ ಪದಾರ್ಥಗಳನ್ನು ಯಾವುದಾದರೂ ಒಂದು ರೂಪದಲ್ಲಿ ಸೇವನೆ ಮಾಡುತ್ತಿದ್ದ ಕಾರಣ ಅವರಿಗೆ ಫುಡ್ ಪಾಯ್ಸನಿಂಗ್ ಸಮಸ್ಯೆ ಎದುರಾಗಿತ್ತು.
  • ನಂತರ ಅವರ ರಕ್ತ ಪರೀಕ್ಷೆ ನಡೆಸಿ ನೋಡಿದಾಗ ಅವರ ದೇಹದಲ್ಲಿ ಅಗತ್ಯ ಪ್ರಮಾಣಕ್ಕಿಂತ ಶೇಕಡ 25 ರಿಂದ 30 ಮಿಲಿಗ್ರಾಂ ಸೋಲನೈನ್ ಅಂಶ ಇರುವುದು ಪತ್ತೆಯಾಯಿತು. ಇದು ಪೋಷಕರಲ್ಲಿ ದಟ್ಟವಾದ ಭಯದ ವಾತಾವರಣವನ್ನು ನಿರ್ಮಾಣ ಮಾಡಿತ್ತು.

​ಬದನೆಕಾಯಿ, ಆಲೂಗಡ್ಡೆ, ಟೊಮೆಟೊ ಐಬಿಎಸ್ ಸಮಸ್ಯೆಯನ್ನು ತೀವ್ರಗೊಳಿಸುತ್ತವೆ

  • ಯಾವ ಮಹಿಳೆಯರಿಗೆ ಈಗಾಗಲೇ ಇರಿಟೇಬಲ್ ಬೋವಲ್ ಸಿಂಡ್ರೋಮ್ ಸಮಸ್ಯೆಯಿದೆ ಅಂತಹವರು ಟೊಮೆಟೊ ಆಲೂಗಡ್ಡೆ ಬದನೆಕಾಯಿ ಕ್ಯಾಪ್ಸಿಕಂ ಇತ್ಯಾದಿ ತರಕಾರಿಗಳನ್ನು ಸೇವನೆ ಮಾಡದೇ ಇರುವುದು ಒಳ್ಳೆಯದು.
  • ಏಕೆಂದರೆ ಇವುಗಳಲ್ಲಿ ಕಂಡುಬರುವ ಸೋಲನೈನ್ ಮತ್ತು ಚಾಕೊನೈನ್ ಎಂಬ ಗ್ಲೈಕೋ ಆಲ್ಕಲಾಯ್ಡ್ ಅಂಶಗಳು ಹೊಟ್ಟೆಯ ಒಳಭಾಗದ ಪದರವನ್ನು ಹಾಳು ಮಾಡುತ್ತವೆ. ಇದರಿಂದ ಮಹಿಳೆಯರಿಗೆ ಮತ್ತಷ್ಟು ಆರೋಗ್ಯದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
  • ಎಣ್ಣೆಯಲ್ಲಿ ಕರಿದ ರೂಪದಲ್ಲಿ ಆಲೂಗಡ್ಡೆಯನ್ನು ಯಾವ ದೇಶದಲ್ಲಿ ಜನರು ಹೆಚ್ಚು ಸೇವನೆ ಮಾಡುತ್ತಾರೆ ಅವರಿಗೆ ಇನ್ಫಾಮೇಟರಿ ಬೋವಲ್ ಡಿಸಾರ್ಡರ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

​ಎದೆಯುರಿ ಸಮಸ್ಯೆಗೆ ಮೂಲ ಕಾರಣ ಆಗಬಹುದು

  • ಕೆಂಪು ಮತ್ತು ಹಳದಿ ಕ್ಯಾಪ್ಸಿಕಂ ಹೆಚ್ಚಾಗಿ ಪಿಜ್ಜಾ ಅಥವಾ ಇನ್ನಿತರ ಆಧುನಿಕ ಜೀವನಶೈಲಿಯ ಆಹಾರ ಪದಾರ್ಥಗಳ ತಯಾರಿಯಲ್ಲಿ ಬಳಕೆ ಮಾಡುತ್ತಾರೆ.
  • ಆದರೆ ಇವುಗಳನ್ನು ಸೇವನೆ ಮಾಡಿದ ನಂತರ ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆ ಹೆಚ್ಚಾಗಿ ಕಂಡುಬರಬಹುದು. ವಿಶೇಷವಾಗಿ ಮಧ್ಯಾಹ್ನ ಊಟ ಆದ ನಂತರ ರಾತ್ರಿಯ ಊಟದ ಬಳಿಕ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

​ಫ್ರೆಂಚ್ ಫ್ರೈ-ಸಮೋಸ ತಿನ್ನುವವರು….

  • ಫ್ರೆಂಚ್ ಫ್ರೈ ತಿನ್ನುವವರು ಅಥವಾ ಸಮೋಸ ಜೊತೆಗೆ ಟೊಮ್ಯಾಟೋ ಕೆಚಪ್ ಸೇವನೆ ಮಾಡುವವರು ಸ್ವಲ್ಪ ನಿಯಮಿತ ಪ್ರಮಾಣದಲ್ಲಿ ಇವುಗಳನ್ನು ಸೇವನೆ ಮಾಡಿದರೆ ಒಳ್ಳೆಯದು.
  • ಏಕೆಂದರೆ ಮಿತ ಪ್ರಮಾಣದಲ್ಲಿ ಮೇಲೆ ಹೇಳಿದ ತರಕಾರಿಗಳು ಅಂದರೆ ಆಲೂಗಡ್ಡೆ ಟೊಮೆಟೊ ಕ್ಯಾಪ್ಸಿಕಂ ಬದನೆಕಾಯಿ ಇತ್ಯಾದಿಗಳು ಆರೋಗ್ಯದ ಮೇಲೆ ಸಾಕಷ್ಟು ಒಳ್ಳೆಯ ಪ್ರಭಾವಗಳನ್ನು ಉಂಟು ಮಾಡುತ್ತವೆ.
  • ಐಬಿಎಸ್ ಅಥವಾ ಎದೆಯುರಿ ಸಮಸ್ಯೆಯನ್ನು ಹೊಂದಿದ ಮಹಿಳೆಯರು ತಮ್ಮ ಆಹಾರ ಪದ್ಧತಿಯಲ್ಲಿ ಒಳ್ಳೆಯ ಬದಲಾವಣೆಯನ್ನು ತಂದುಕೊಂಡು ಕೇವಲ ಅಗತ್ಯವಾದ ಆಹಾರಗಳನ್ನು ಅಗತ್ಯವಾದ ಪ್ರಮಾಣದಲ್ಲಿ ಮಾತ್ರ ಸೇವನೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು

About The Author

Leave a Reply

Your email address will not be published. Required fields are marked *