ಐತಿಹಾಸಿಕ ಶ್ರೀ ಕ್ಷೇತ್ರ ನಾಯಕನಹಟ್ಟಿಯಲ್ಲಿ ಕೆರೆ ತುಂಬಿಸುವ ಯೋಜನೆಗೆ ಕ್ಷಣಗಣನೆ: ಸಚಿವ ಶ್ರೀರಾಮುಲು ಚಾಲನೆ
1 min readಚಿತ್ರದುರ್ಗ: ಗಂಗೆಯ ಭೂಮಿ ಪೂಜೆಯ ಸಂಭ್ರದಲ್ಲಿ ನೂರಾರು ಹಳ್ಳಿಯ ಜನರು 59 ಕೆರೆ ತುಂಬಿಸುವ ಐತಿಹಾಸಿಕ ಯೋಜನೆಯ ಭೂಮಿ ಪೂಜೆಗೆ ನಾಯಕನಕಟ್ಟಿ ಬಳಿಯ ಚಿಕ್ಕಕೆರೆಯಲ್ಲಿ ಸೋಮವಾರ ಪೂಜೆಗೆ ಸಾಕ್ಷಿಯಾಗಲಿದ್ದು ಸಾವಿರಾರು ಜನರು ಅಂತಹ ಮಂಗಳ ಕಾರ್ಯಕ್ಕೆ ಕಾಯುತ್ತಿದ್ದಾರೆ.
ಬಂಡೆಗಳ ನಾಡು ಮೊಳಕಾಲ್ಮುರಲ್ಲಿ ಒಣ ಭೂಮಿ ಎಂಬ ನೋವು ಎಲ್ಲಾ ರೈತರಲ್ಲಿ ನೆಲೆಯುರಿತ್ತು. ಇದಕ್ಕೆ ಎಂದು ಕೊನೆಯಪ್ಪ ಎಂಬ ಭಾವನೆಯಲ್ಲಿ ಕ್ಷೇತ್ರದ ಜನರು ಜಾತಕ ಪಕ್ಷಿಯಂತೆ ಕಾಯುತ್ತ ಆಗಸ ನೋಡುತ್ತಿದ್ದ ಜನರಲ್ಲಿ ಇಂದು ಸಂತೋಷ ಮನೆ ಮಾಡಿದೆ.
ಶಾಶ್ವತ ಮತ್ತು ರೈತ ಪರ ಯೋಜನೆ ಒತ್ತು ನೀಡಿದ ರಾಮುಲು: ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯ ನಾಯಕ ರಾಮುಲು ಎಂಟ್ರಿಯಿಂದ ಕೇವಲ ಕಾಗದದಲ್ಲಿ , ಭಾಷಣದಲ್ಲಿ ಅಭಿವೃದ್ಧಿ ಬಗ್ಗೆ ಕೇಳಿ ಅದೇ ಕಥೆ ಎಂಬ ಮನಸ್ಥಿತಿಯಲ್ಲಿ ಇದ್ದ ಜನರಿಗೆ ರಾಮುಲು ಗಂಟೆಗಳ, ತಿಂಗಳ ಲೆಕ್ಕದಲ್ಲಿ ವೇಗದಲ್ಲಿ ಸಾವಿರಾರು ಕೋಟಿ ಅನುದಾನ ಮತ್ತು ಶಾಶ್ವತ ಮತ್ತು ರೈತಪರ ಯೋಜನೆ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ.ಚಳ್ಳಕೆರೆ ತಾಲ್ಲೂಕಿನ ಮೊಳಕಾಲ್ಮುರು ಕ್ಷೇತ್ರದ 6 ಕೆರೆಗಳು, ಮೊಳಕಾಲ್ಮುರು ಕ್ಷೇತ್ರದ 53 ಕೆರೆಗಳಿಗೆ ನೀರುಣಿಸಲು ಯೋಜನೆ ಸಿದ್ಧವಾಗಿದ್ದು ಒಟ್ಟು 59 ಕೆರೆಗಳಿಗೆ ₹ 580.35 ಕೋಟಿ ವೆಚ್ಚವಾಗಲಿದ್ದು, ಅಂದಾಜು 330 ಕಿ.ಮೀ ದೂರದ ಪೈಪ್ ಲೈನ್ ಅಳವಡಿಸಲಾಗುತ್ತದೆ. ಕೆರೆಗಳಿಗೆ ನೀರು ತುಂಬಿಸುವುದರಿಂದ ಹೆಚ್ಚು ಕಡಿಮೆ ಮೊಳಕಾಲ್ಮುರು ಭಾಗದ ಎಲ್ಲಾ ಹಳ್ಳಿಗಳ ಬೊರವೆಲ್ ನಿರಂತರ ನೀರಿನ ಮಟ್ಟ ಹೆಚ್ಚಲು ಹಾಗೂ ನೀರಾವರಿಗೆ ಅನುಕೂಲವಾಗಲಿದೆ ಎಂಬ ದೃಷ್ಟಿಯಿಂದ ರಾಮುಲು ಇಂತಹ ಐತಿಹಾಸಿಕ ಯೋಜನೆಗಳಿಗೆ ಒತ್ತು ನೀಡುತ್ತಿದ್ದು ಜನರು ಸಹ ರಾಮುಲು ಅವರ ಕಾರ್ಯದ ಬಗ್ಗೆ ಕ್ಷೇತ್ರದಲ್ಲಿ ಶ್ಲಾಘನೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ರಾಮುಲು ಉತ್ತಮ ಕೆಲಸಗಾರ ಎಂಬುದರಲ್ಲಿ ಎರಡು ಮಾತಿಲ್ಲ ಎಂಬ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.