April 26, 2024

Chitradurga hoysala

Kannada news portal

ತುರುವನೂರು ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ಆದೇಶ ರದ್ದುಗೊಳಿಸಬೇಕು : ಶಾಸಕ ರಘುಮೂರ್ತಿ

1 min read

ಚಿತ್ರದುರ್ಗ:ನಿಪ್ಪಾಣಿಗೆ ಸ್ಥಳಾಂತರಿಸಿರು ತುರುವನೂರು ಪ್ರಥಮ ದರ್ಜೆ ಕಾಲೇಜಿನ ಆದೇಶವನ್ನು ರದ್ದಗೊಳಿಸಬೇಕು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತ ಸರ್ಕಾರಕ್ಕೆ ಒತ್ತಾಯಿಸಿದರು.

 ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಚಿತ್ರದುರ್ಗ ತಾಲೂಕು ತುರುವನೂರು ಹೋಬಳಿ ಕೇಂದ್ರದಲ್ಲಿ ಗ್ರಾಮೀಣ ಭಾಗದ ಆರ್ಥಿಕವಾಗಿ ದುರ್ಬಲರು ಹೆಚ್ಚಾಗಿರುವ ಪ್ರದೇಶವಾಗಿದ್ದು  ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ  ಹಾಗೂ ಎಲ್ಲಾ ವರ್ಗದ ಜನರ ಮಕ್ಕಳ ಉನ್ನತ ಶಿಕ್ಷಣಕ್ಕೆ ಒತ್ತು ನೀಡುವ ದೃಷ್ಟಿಯಿಂದ ಸರ್ಕಾರಿ ಪದವಿ ಕಾಲೇಜು ಪ್ರಾರಂಭಿಸಿದ್ದು  ಕಲಾ ವಿಭಾಗವನ್ನು ಕಲಿಸಲು ಅನುಮತಿಸಿದ್ದು, ಪ್ರಸ್ತುತ ಸಾಲಿನಲ್ಲಿ ವಾಣಿಜ್ಯ ವಿಷಯ ಸಹ ಅನುಮತಿ ಪಡೆಯುವ ಉದ್ದೇಶ ಸಹ ಹೊಂದಿದೆ ಎಂದರು. ಗ್ರಾಮೀಣ ಭಾಗದ ಈ ಕಾಲೇಜಿಗೆ  ಸರ್ಕಾರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ಕಾಲೇಜು ಕಟ್ಟಡ ಕಾಮಗಾರಿ , ಇತರೆ ಸೌಲಭ್ಯಗಳಿಗಾಗಿ 2.80 ಕೋಟಿಗಳ ಅನುದಾನ ನೀಡಿದ್ದು ಕಟ್ಟಡ ಕಾಮಗಾರಿ ಚಾಲನೆಯಲ್ಲಿದೆ. ಈಗ 56 ವಿದ್ಯಾರ್ಥಿಗಳು ಸಹ ವ್ಯಾಸಂಗ ಮಾಡುತ್ತಿದ್ದಾರೆ.2020-21 ಸಾಲಿನಲ್ಲಿ 57 ವಿದ್ಯಾರ್ಥಿಗಳು ಕಾಲೇಜಿಗೆ ಸೇರಲು ಅರ್ಜಿಯನ್ನು ಸಹ ಹಾಕಿದ್ದಾರೆ. ಪ್ರಾಂಶುಪಾಲರು ಸಹ ವಿದ್ಯಾರ್ಥಿಗಳ ವಿವರವನ್ನು  ಮಾನ್ಯ ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆ ಇವರಿಗೆ ನೀಡಿರುವ ವರದಿಯಲ್ಲಿ ಸಂಪೂರ್ಣ ವಿದ್ಯಾರ್ಥಿಗಳ ವಿವರ ಸಹ ಸಲ್ಲಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ  ಪರಿಶಿಷ್ಟ ಪಂಗಡಕ್ಕೆ ಸೇರಿದ ಚಳ್ಳಕೆರೆ , ಮೊಳಕಾಲ್ಮುರು, ದಾವಣಗೆರೆ ಜಿಲ್ಲೆಯ ಜಗಳೂರು ಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತ್ತು ಇತರೆ ಜನಾಂಗದ  ಹೆಣ್ಣು ಮಕ್ಕಳ ಅಭ್ಯಾಸದ ಹಿತ ದೃಷ್ಟಿಯಿಂದ ಕಾಲೇಜು ಸ್ಥಳಾಂತರ ರದ್ದು ಗೊಳಿಸಿ ಇರುವ ಸ್ಥಳದಲ್ಲಿ ಕಾಲೇಜು ಮುಂದುವರೆಸಲು ಸರ್ಕಾರ ಕೂಡಲೇ ಕ್ರಮ ವಹಿಸಿಕೊಳ್ಳಬೇಕು. ಈ ಕಾಲೇಜಿನ 5 ಜನ ಕಾಯಂ ಉಪಾನ್ಯಾಸಕರಿದ್ದು ಬೇರೆಡೆಗೆ ನಿಯೋಜನೆಗೊಳಿಸಿದ್ದು ಅತಿಥಿ ಉಪನ್ಯಾಸಕರಿಂದ ಬೋಧನೆ ಮಾಡಿಸುತ್ತಿದ್ದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಾಗೂ ಸದರಿ ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರ ಮಾಡಲಾಗಿರುವ ಆದೇಶ ರದ್ದುಗೊಳಿಸಿ  ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು  ಸ್ಥಳದಲ್ಲಿ ಮುಂದುವರೆಸಿದರೆ ಅನುಕೂಲವಾಗುತ್ತದೆ ಉನ್ನತ ಶಿಕ್ಷಣಕ್ಕೆ ನೇರವಾಗಲಿದೆ ಆದ್ದರಿಂದ ಮುಖ್ಯಮಂತ್ರಿ ಮತ್ತು ಸಚಿವರು ಗಮನ ಹರಿಸಿ ನ್ಯಾಯ ಒದಗಿಸಬೇಕು  ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

About The Author

Leave a Reply

Your email address will not be published. Required fields are marked *